Monday, 10 February 2020

ಗಂಡಿಗೂ ಮನಸ್ಸಿದೆ





 ನಿನ್ನೆ ಪ್ರೀತಿಸುವೆ
ಬಾನ ದಾಟಿ ಕಣ್ಣ ಕಟ್ಟಿ ಬಿಟ್ಟರು
ತಪ್ಪದೆ ಬಂದು ನಿನ್ನನೆ ಅಪ್ಪುವೆ

ನೀ ಕಾಡಿಸಿ ನನ್ನ ಕೋಪಿಸಿದರು
ಗುಟ್ಟಾಗಿ ಮನದಲ್ಲಿ ಪ್ರೀತಿಸುವೆ

ಕ್ಷಣ ಕೂಡ ಎಲ್ಲೆ ಹೋದರು
ನಿನ್ನ ಅಪ್ಪುಗೆಯ ನೆರಳಾಗಿರುವೆ

ಮುಂದಿನ ಏಳೇಳು ಜನ್ಮಕೂ
ನಿನ್ನನೆ ಪ್ರೀತಿಸುವೆ ಚೆಲುವೆ
     ......ನಿನ್ನ ಹುಡ್ಗ್(ಶಂಭು)
(Propose Day Special)

Tuesday, 21 January 2020

ಹತ್ತಿ ಬಿತ್ತಿ

        ನಮ್ಮೂರು ಉತ್ತರ ಕರ್ನಾಟಕದ ಒಂದು ಹಳ್ಳಿ ರಿ, ನಮ್ಮದು ಹೊಲ ಅದ, ಹೊಲ ಅದ ಅಂಥ ಹೇಳಿ ಸುಮ್ಮನ ಕೂತಕಾಲಕ ಆಕೆತ ಏನ್ರಿ,  ಅದ್ರಾಗ ಭಿತ್ತಿ ಬೆಳಿಬೇಕರಿ ಅಂದ್ರ ನಮಗ ಎರಡು ಹೊತ್ತು ಊಟಕ ಆಕೇತ್ರಿ. ಅಂದಂಗ ನಮ್ಮ ಕಡೆ ನೀರಾವರಿ ಬಹಳ ಕಡಿಮಿರಿ ನಾವು ಏನ್ ಮಾಡಿದ್ರು ಮುಗಿಲ ನೋಡಿ ಜೇವನ ಮಾಡಬೇಕರಿ. ಏರಿ ಹೊಲ ಇದ್ದರ ವರ್ಷಕ್ ಎರಡು ಪೀಕು ಬರತವರಿ ಮಸಾರಿ ಇದ್ರ ವರ್ಷಕ್ ಒಂದ್ ಪೀಕು ನೋಡ್ರಿ, ನಮ್ಮಪ್ಪ ಅಜ್ಜ ಹಾಕಿದ್ದು ಆಲ ಮರ ಅಂಥ ಹೇಳಿ ವರ್ಷಾ ಏರಿ ಹೊಲಕ್ ಬೆಳ್ಳುಳ್ಳಿ ಮತ್ತ ಒಳ್ಳಾಗಡ್ಡಿ ಬಿಟ್ಟು ಏನು ಹಾಕಲ್ಲರಿ, ರೇಟ್ ಅಂತೂ ಕೇಳಬ್ಯಾಡ್ರಿ ಜೂಜು ಆಡಿದ್ರ ಹತ್ತು ಸಲಕ ಒಂದು ಸರತಿ ನರ ಗೆಲ್ಲತಿವಿ ಅನ್ನೊ ನಂಬಿಕಿನರ ಇರತತಿ, ಉಳ್ಳಾಗಡ್ಡಿ ರೇಟ್ ಅಂತೂ ಜೂಜು ಅಟಕಿನೂ ಕಡಿ ಆಗೆತೇರಿ ಸಿಕ್ಕರ ಶಿವ ಇಲ್ಲಂದ್ರ ಏನೂ ಇಲ್ಲ.
ನಮ್ಮಪ್ಪಗರ ರೇಟ್ ನೋಡಿ ತೆಲಿ ಕೆಟ್ಟು ಹೋಗಿತ್ತರಿ ಏನಾರ ಮಾಡಬೇಕು ಅಂಥ ಚಿಕ್ಕಯ್ಯನ ಕಟ್ಟಿ ಬೇವಿನಮರದ ನೆಳ್ಳಿಗೆ ಅಡ್ಡ ಆಗಿ ಗುರೆಳ್ಳು ಪುಡಿ ಅಂತ ತೆಲಿ ಕೂದಲನ ಕೆರಕಳ್ಳಕಾತಿದ್ರಿ, ಅಷ್ಟರಾಗ ಊರಾಗ ಏನೋ ಮೈಕಿನ್ ಶಬ್ದ ಕೇಳಿಸ್ತೀರಿ ಎದ್ದು ನೋಡಿದಿರಾ ಕಾರ್ ಗಾಡಿ, ಅದ್ಕ ಮೈಕ್ ಕಟ್ಟಗೊಂಡು ಬಿ ಟಿ ಹತ್ತಿ ಅದ್ವೆರ್ಟಿಸ್ ಮಾಡಾಕತ್ತಿದ್ರು, ನಮ್ಮಪ್ಪಗರ ಮನಸ್ಸು ತಡೀಲಿಲ್ಲರಿ ಎದ್ದು ಬಡಬಡ ಕಾರ್ ಗಾಡಿ ಹತ್ತರ ಹೋದಂವನ ಎಲ್ಲ ಕೇಳಿ ಮತ್ತ ಒಂದ್ ಪಾಕೆಟ್ ಹತ್ತಿ ಬೀಜನ ತಗೊಂಡ್ರಿ .ನಮ್ಮಪ್ಪ ಗಂತೂ ಏನೋ ಹೊಸ ಹುಮ್ಮಸ್ಸು ಮರು ದಿವಸನ ಹೊಲ ಹಸನ್ ಮಾಡಿ ಹತ್ತಿ ಬಿತ್ತೆ ಬಿಟ್ಟರಿ, ಬಹಳ ಚಂದ ಜೋಪಾನ ಮಾಡಿದ್ರು, ಚೆಂದ ಅಂದ್ರ ಹೆಂಗ ಅಂದ್ರಿ ಮನಿ ಮಂದಿಕಿನು ಹೆಚ್ಚ ಕಾಳಜಿ ಮಾಡಿದ್ರ, ಗೊಬ್ಬರ ಹಾಕೋದು, ಔಷಧಿ ಹೊಡೆಯದು ಎಲ್ಲ ಮಾಡಿದ್ರು ಇನ್ನೇನು ಹತ್ತಿ ಕಾಯಿ ಹಿಡಿಬೇಕು ಅನ್ನದ್ರೊಳಗ ಮಳಿರಾಯ ನಮ್ಮ ಮ್ಯಾಲ ಸಿಟ್ಟು ಆದಂಗ ಕಾಣಿಸ್ತರಿ, ನಮ್ಮಪ್ಪರ ದಿವಸ ಮಾಡ ನೋಡವರಿ, ನಮ್ಮ ಅಪ್ಪ ಮಾಡ ನೋಡದ ಬಿಡಲಿಲರಿ ಮಳಿ ಅಂತೂ ಬರ್ಲೆ ಇಲ್ಲರಿ, ಇದ್ದದ ಹಸಿಗೆ ಹತ್ತಿ ಗಿಡ ಒಂದಿಷ್ಟು ಕಾಯಿ ಹಿಡದ್ದವು, ರಣರಣ ಬಿಸಿಲು ಹೊಡ್ಯಾಕತ್ತರಿ, ಬಿಸಿಲಿಗೆ ಹತ್ತಿ ಒಡೆಕತ್ತರಿ, ಒಡ್ದಿದ ಬಿಳಿ ಹತ್ತಿ ನೋಡಬೇಕಂತನೂ ಅಥವಾ ನಮ್ಮ ಅಪ್ಪ ಮಾಡ ನೋಡಿದಕನಾ ಮಳಿರಾಯ ಬಂದ ಬಿಟ್ಟರಿ, ಏನ್ ಕೇಳತಿರಿ ಬಿಳಿ ಬಣ್ಣದ ಹತ್ತಿ ಮಳಿಗೆ ಗೊತ್ತ ಸಿಗದಂಗ ಆತು, ಹತ್ತಿ ಬಿಡಸಾಕ ಆಳು ನೋಡಿದ್ರ ಸಿಗವಲ್ಲವು ಹಂಗು ಹಿಂಗು ಕಷ್ಟ ಪಟ್ಟು ನಮ್ಮಪ್ಪ ಆಳು ಕರಕಂಡ ಬಂದ್ರು ಹತ್ತಿ ಬಿಡಿಸಿ ಮಾರ್ಕೆಟ್ಗೂ ಒಯ್ದರು, ಮನಿಗೆ ಬಂದು ಆಳಿಗೆ ರೊಕ್ಕ ಕೊಟ್ಟರ ಹತ್ತಿ ಮಾರಿದ್ ಅರ್ಧ್ ರೊಕ್ಕ ಆಳಿಗೆ ಹೋತು ಇನ್ನ ಅರ್ಧ್ ಹೊಲದ್ ಖರ್ಚಿಗೆ ನೀಟ್ ಆತು, ಇದೆಲ್ಲ ನೋಡಿ ನಮ್ಮಪ್ಪಗ ತೆಲಿ ತಿರಿಗಿದಿಂಗ ಆತು. ಮತ್ತ ನಮ್ಮಪ್ಪ ಚಿಕ್ಕಯ್ಯನ ಕಟ್ಟಿ ಬೇವಿನಮರದ ನೆಳ್ಳಿಗೆ ಅಡ್ಡ ಆಗಿ ಗುರೆಳ್ಳು ಪುಡಿ ಅಂತ ತೆಲಿ ಕೂದಲನ ಕೆರಕಳ್ಳಕಾತಿದ್ರಿ.
ಹಿಂಗ ಅದ ನೊಡ್ರಿಪ ಈಗಿನ ಬೇಸಾಯ, “ಉಣ್ಣಾಕ ಆದ್ರ ತೋಡಕ ಆಗಲ್ಲ, ತೋಡಕ ಆದ್ರ ಉಣ್ಣಾಕ ಆಗಲ್ಲ”.

ಇಂತಿ ನಿಮ್ಮ

ಶಂಭು
ಕೆಂಗುಲಾಬಿ


              ಮೂಡಣದ ಸೂರ್ಯ ಪಡುವಣದಲ್ಲಿ ನಿಂತಿಹಿನು, ಏಕೊ ಈ ದಿನವೆಕೆ ವರುಷವಾಗಿದೆ, ಭಾರವಾದ ಮನಸ್ಸಿನಿಂದ ಒಂದು ಕ್ಷಣವೂ ಕೂಡ ಬಹು ದೊಡ್ಢದೆನಿಸಿದೆ, ಸೋತ ಕಣ್ಣುಗಳು ಆಯಾಸದಿಂದ ಬಳಲಿವೆ, ಎದ್ದು ನಿಲ್ಲಲು ಏಕೊ ಒಲ್ಲೆ ಎನ್ನುತಿವೆ ದಣಿದ ಕಾಲುಗಳು. ಯಾಕೆ ಇಂದು ಮನಸ್ಸಿಗೆ ತಳಮಳ, ಕೊಂಚ ಕಣ್ಣ ರೆಪ್ಪೆಗಳನ್ನು ಮುಚ್ಚಿ ದಿಂಬಿಗೆ ಒರಗಿದೆ. ಮನಸ್ಸು ಮಿಂಚಂತೆ ಅವಳ ನೆನಪುಗಳಿಗೆ ಜಾರಿತು.
ಅದು ಮಹಾನವಮಿ ಸಂಬ್ರಮ, ನೀರೆಯರು ನೇರಗಿನ ಸಿರೆಯುಟ್ಟು ನವಿಲಿನಂತೆ ನಲಿಯುತಿಹರು, ಆಕಾಶದ ಕಡು ನೀಲಿ ಬಣ್ಣ, ಎತ್ತರ ಮರಗಳ ತಂಪಾದ ಗಾಳಿ, ಮನೆಗಳಿಗೆ ಅಲಂಕರಿಸಿದ ಹಸಿರು ತೋರಣ, ರಸ್ತೆ ಅಗಲ ಬಣ್ಣದ ರಂಗೋಲಿ ಇವೆಲ್ಲವೂ ಸಂರ್ಭಮದ ಮಹಾನವಮಿಗೆ ಸಾಕ್ಷಿಯಾಗಿದ್ದವು. ಇದ್ದಕ್ಕಿದ್ದಂತೆ ಎದೆಯಲ್ಲಿ ತಂಗಾಳಿ ನುಸುಳಿತು ಯಾಕೆಂದು ಕತ್ತು ಹೊರಳಿಸಿದರೆ, ಅವಳ ಉದ್ದನೆಯ ಕೂದಲಿನ ಜಡೆ ಅವಳ ನಿತಂಬಗಳಿಗೆ ಸ್ಪರ್ಷಿಸಿತ್ತಿತ್ತು, ಮುಡಿಗೆ ಮುಡಿದ ಕೆಂಗುಲಾಬಿ ಹೂಗಳು ಮುತ್ತಿಕುತ್ತಿದ್ದವು, ಸುಂದರವಾದ ಕಿವಿಗಳಿಗೆ ನಾ ಮುಂದು ತಾ ಮುಂದು ಎಂದು ಕಿವಿ ಓಲೆಗಳು ಜೊತಾದುತ್ತಿದ್ದವು, ಅವಳುಟ್ಟ ಚಿತ್ತಾರದ ರವಿಕೆ ಅವಳನ್ನು ಅಪ್ಪಿತ್ತು, ಅವಳುಟ್ಟ ರೆೇಷ್ಮೆ ಸಿರೆ ಅವಳ ಬಿಂಕದ ನಡಿಗೆಗೆ ನಾಚುತ್ತ ಬಳುಕುತ್ತಿತ್ತು, ಇಳೆಯು ಅವಳ ಪಾದ ಸ್ಪರ್ಷಗಳಿಗೆ ಹವಣಿಸುತ್ತಿತ್ತು. ಎದೆಯಲ್ಲಿ ತಂಗಾಳಿಯು ಜೋರಾಯಿತು. ಮನಸ್ಸು ಮುದಗೊಂಡು ಅವಳ ಕಮಲದಂತಹ ಮುಖ ನೊಡಲು ಕಾತೊರೆಯುತ್ತಿತ್ತು.
ಅವಸ ಅವಸರದಿ ಎದ್ದು ಹೊರಟಾಗ ಮನೆಯ ಬಾಗಿಲ ಹೋಸ್ತಿಲಕ್ಕೆ ಕಾಲೆಡವಿ ದೊಪ್ಪನೆ ನೆಲಕ್ಕುರುಳಿ ಬಿಟ್ಟೆ. ಕಣ್ಣು ತೆರೆದು ನೋಡಿದಾಗ ನಾ ಬಿದ್ದಿದ್ದು ನಾನು ಮಲಗಿದ ಮಂಚದಿಂದ, ಆಗ ನನಗರಿವಾಯ್ತು ಇದೊಂದು ಭಾನುವಾರದ ಬೆಳಿಗಿನ ಕನಸ್ಸೆಂದು.
                              
                                                                                                                                                    ಇಂತಿ ನಿಮ್ಮ
                                                                                                                                                           ಶಂಭು

Sunday, 19 January 2020

ನೀ ನನ್ನವಳು


ನೂರು ಕಾಲ ಬಾಳು

ನೂರು ಕಾಲ ಬಾಳು:

ಅವಳ ಹುಟ್ಟು ಹಬ್ಬದ 
ಸಂಭ್ರಮದ ನೆನಪಲ್ಲಿ,

ಗುನುಗಿದೆನು ಒಂದೆರಡು 
ಕವನಗಳನ್ನು ಮನದಲ್ಲಿ,

ಅವಳೆಂದಳು ಇದೇನಿದು 
ಹೊಸತನ ನಿನ್ನಲ್ಲಿ,

ನಾನೆಂದೆನೂ ನೂರು ಕಾಲ
ಬಾಳು  ನನ್ನ ಜೊತೆಯಲ್ಲಿ.

.......ಶಂಭು 

ನೀ ಒಪ್ಪಿದರೆ

ನೀ ಒಪ್ಪಿದರೆ:

ನಿನ್ನ ಕೈ ಹಿಡಿದು 
ಒಂದೆರಡು ಸವಿ ನುಡಿದು 
ಅಪ್ಪುಗೆಯ ಬಯಸುವೆನು 
ನೀನು ಒಪ್ಪಿದರೆ,

ನಿನ್ನ ಬೆರಳ ಹಿಡಿದು 
ಬರೆಯುವೆನು ಎದೆಯಮೆಲೆ 
ನನ್ನೆಲ್ಲ ಭಾವನೆಗಳ ಸುರಿದು
ತಿದ್ದಿ ಬಿಡು ನಾ ತಪ್ಪಿದರೆ 
ಅಪ್ಪಿ ಬಿಡು ನೀ ಒಪ್ಪಿದರೆ.